ಭಾರತದ
ಪ್ರಜಾಪ್ರಭುತ್ವದ ಆಧಾರವು ಚುನಾವಣಾ ಫಲಿತಾಂಶಗಳನ್ನ ಆಧರಿಸಿದೆ. ನಮ್ಮ ಶಾಸಕಾಂಗಗಳು ಮತ್ತು
ಸಂಸತ್ತುಗಳು ಜನರಿಂದ ಮತ್ತು ಜನರಿಗಾಗಿ ಚುನಾಯಿತವಾಗಿವೆ. ಸಂವಿಧಾನ ಬದ್ಧವಾಗಿ ಮತದಾನ ಮಾಡುವ ಹಕ್ಕನ್ನು ಪಡೆದಿರುವುದು ನಮ್ಮೆಲ್ಲರ ಅದೃಷ್ಟ. ಹೀಗಿದ್ದು ಕೂಡ, ಇತ್ತೀಚಿನ ದಿನಗಳಲ್ಲಿ
ಚುನಾವಣಾ ಆಯೋಗ ಬಿಡುಗಡೆ ಮಾಡಿರುವ
ಅಂಕಿ ಸಂಖ್ಯೆಗಳನ್ನ ಗಮನಿಸಿದಾಗ, ಚುನಾವಣಾ ಪ್ರಕ್ರಿಯೆಯಲ್ಲಿ ನಂಬಿಕೆ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿ ಕಾಣುತ್ತಿದೆ. ಅದರಲ್ಲೂ ಯುವ ಸಮೂಹ ತನ್ನದೇ
ಆದ ಕಾರಣಗಳಿಂದಾಗಿ ಚುನಾವಣೆಗಳಿಂದ ದೂರ ಉಳಿಯುತ್ತಿದ್ದಾರೆ.
ಕರ್ನಾಟಕದ
ಜನಸಂಖ್ಯೆಯು ಸುಮಾರು ಆರು ಕೋಟಿ ಇದೆ.
ಕರ್ನಾಟಕ ಚುನಾವಣಾ ಆಯೋಗದ 2018ರ ಪರಿಷ್ಕೃತ ಮತದಾರರ
ಕರಡು ಪ್ರತಿಯ ಪ್ರಕಾರ ಮತದಾನದ ಹಕ್ಕು ಪಡೆದಿರುವವರು ಸುಮಾರು 4.9 ಕೋಟಿಯಷ್ಟು, ಬೆಂಗಳೂರಿನ
ಜನಸಂಖ್ಯೆಯು ಸುಮಾರು 1.2ಕೋಟಿಯಷ್ಟಿದ್ದರೆ, ಇವರಲ್ಲಿ ಮತದಾನದ ಹಕ್ಕನ್ನು ಪಡೆದವರು 85,92,815 ಪ್ರಜೆಗಳು.
2008 ರ ವಿಧಾನಸಭಾ ಚುನಾವಣೆಯಲ್ಲಿ
ಬೆಂಗಳೂರಿನಲ್ಲಿ 47.22% ಮತದಾನವಾಗಿತ್ತು, 2013 ರಲ್ಲಿ 58.27% ಮತದಾನವಾಗಿತ್ತು, ಇದರ
ಅರ್ಥ ಅರ್ಧದಷ್ಟು ಜನ ಮಾತ್ರ ತಮ್ಮ
ಹಕ್ಕನ್ನ ಚಲಾಯಿಸಿದ್ದರು. ಒಂದರ್ಥದಲ್ಲಿ ಹೇಳುವುದಾದರೆ ಸರ್ಕಾರದ ನಿರ್ಮಾಣ ಮತ್ತು ನಿರ್ಧಾರಗಳಲ್ಲಿ ಇನ್ನೂ ಅರ್ಧದಷ್ಟು ಜನರ ಪಾಲುದಾರಿಕೆಯೇ ಇರಲಿಲ್ಲ.
ಗ್ರಾಮೀಣ ಪ್ರದೇಶಗಳಿಗೆ ಗಮನಿಸದರೆ ಬೆಂಗಳೂರಿನಂತಹ ನಗರ ಪ್ರದೇಶದಲ್ಲಿ ಮತದಾನ ಪ್ರಮಾಣವು ಕಡಿಮೆಯಾಗಿರುತ್ತದೆ. ಇದಕ್ಕೆ ಅನೇಕ ಕಾರಣಗಳಿರಬಹುದು. ಮತದಾನದಿಂದ ದೂರ ಉಳಿಯುವವರಲ್ಲಿ ಅತಿ ದೊಡ್ಡ ಸಂಖ್ಯೆ ಯುವಕರದ್ದು ಅದರಲ್ಲೂ ಮೊದಲ ಬಾರಿ ಮತ ಚಲಾಯಿಸುವ ಯುವಕರಂತು ಬಹಳ ದೊಡ್ಡ ಸಂಖ್ಯೆಯಲ್ಲಿ ಮತದಾನದಿಂದ ದೂರ ಉಳಿಯುತ್ತಿದ್ದಾರೆ.
ಯುವಕರು
ಮತದಾನದಿಂದ ದೂರ ಉಳಿಯಲು ಕೆಲವು
ಕಾರಣಗಳಿವೆ. ಸಿಟಿಯಲ್ಲಿ ವಾಸಿಸುವ ಪ್ರಜೆಗಳು ಬಹಳಷ್ಟು ಮಂದಿ ವಲಸೆ ಬಂದಿರುವವರು,
ಬೆಂಗಳೂರು ನಗರ ನಮಗೆ ಸೇರಿಲ್ಲ
ಎಂಬ ಮನೋಭಾವ ಹೊಂದಿರುವವರು, ನನ್ನ ಒಂದು ಮತದಿಂದ
ನಗರವನ್ನ ಬದಲಾವಣೆ ಮಾಡಲಾಗುವುದಿಲ್ಲ ಎಂಬ ನಿರಾಶಾವಾದ, ರಾಜಕಾರಣಿಗಳೆಲ್ಲ
ಒಂದೇ ಯಾರನ್ನೂ ನಂಬಲು ಸಾಧ್ಯವಿಲ್ಲ ಎಂಬ ಮನೋಭಾವ, ಐ
ಹೇಟ್ ಪೋಲಿಟಿಕ್ಸ್ ಎಂಬ ನುಡಿ ಹೀಗೇ
ಹಲವಾರು ಕಾರಣಗಳು.
ಮತದಾನವು
ರಾಜಕೀಯ ವ್ಯವಸ್ಥೆಯನ್ನು ನಿಯಂತ್ರಿಸುವುದಕ್ಕಾಗಿ ಭಾರತೀಯ ಸಂವಿಧಾನ ನೀಡಿರುವ ಒಂದು ಬಲವಾದ ಅಸ್ತ್ರ.
ಸಮಾಜದಲ್ಲಿ ಏನೇ ಬದಲಾವಣೆ ತರಬೇಕೆಂದರು
ಮುಕ್ತ ಮತದಾನದಿಂದ ಮಾತ್ರ ಸಾಧ್ಯ, ಸಂವಿಧಾನವು ಹೇಳುವ ಪ್ರಕಾರ ಪ್ರಜೆಗಳಿಂದ ಆಯ್ಕೆಯಾದ ಸರ್ಕಾರ ಜನರ ಆಶೋತ್ತರಗಳಂತೆಯೇ ನಡೆಯಬೇಕು.
ಪ್ರಜೆಗಳಿಗೆ ಸರಕಾರವನ್ನು ಸ್ಥಾಪಿಸುವ ಮತ್ತು ಅಧಿಕಾರದಿಂದ ಕೆಳಗಿಸುವ ಹಕ್ಕನ್ನು ಮತದಾನವು ನೀಡಿದೆ. ಪ್ರಜಾಪ್ರಭುತ್ವದಲ್ಲಿ ಮತದಾನ ಹಾಗೂ ಚುನಾವಣೆ ಒಂದೇ
ನಾಣ್ಯದ ಎರಡು ಮುಖಗಳಿದ್ದಂತೆ.
ಬದಲಾವಣೆಯನ್ನ
ಮಾಡುವಲ್ಲಿ ನಿಮ್ಮ ಮತ ಪ್ರಮುಖ ಪಾತ್ರವನ್ನು
ವಹಿಸುತ್ತದೆ ನೀವು ಪ್ರಸ್ತುತ ಸರ್ಕಾರದ
ಬಗ್ಗೆ ಅತೃಪ್ತರಾಗಿದ್ದರೆ, ನೀವು ಉತ್ತಮ ಸರ್ಕಾರಕ್ಕೆ
ಮತ ಹಾಕಬಹುದು. ಭವಿಷ್ಯದಲ್ಲಿ ನೀವು ಬಯಸಿದ ಸರ್ಕಾರವನ್ನ
ನಿರ್ಮಿಸಬಹುದು. ನೀವು ಮತ ಚಲಾಯಿಸದೇ
ಇದ್ದಾಗ, ಕಡಿಮೆ ಮತದಾನವಾದಾಗ ಈ ಅವಕಾಶವನ್ನ ಪಡೆದ
ಸಮಾಜಘಾತಕ ಶಕ್ತಿಗಳು ಅಧಿಕಾರಕ್ಕೆ ಬರುವ ಅವಕಾಶವಿರುತ್ತದೆ. ಇಂಥವರು
ಅಧಿಕಾರಕ್ಕೆ ಬಂದಾಗ ಸಮಾಜವನ್ನು ಒಡೆದು ತಮ್ಮ ಹಿತಾಸಕ್ತಿಯನ್ನ ಕಾಯ್ದುಕೊಳ್ಳುವಲ್ಲಿ
ಮಗ್ನರಾಗುತ್ತಾರೆ. ಇದರಿಂದಾಗಿ ಸಾಮಾಜಿಕ ಭದ್ರತೆ ಮತ್ತು ಸುರಕ್ಷತೆಗೆ ಅಪಾಯವಾಗುತ್ತದೆ. ನೀವು ಚಲಾಯಿಸುವ ಮತದಿಂದ
ಆಯ್ಕೆಯಾಗಿ ಬರುವ ಶಾಸಕ ಸಂಸದರಿಗೆ
ಕಾನೂನುಗಳನ್ನ ರೂಪಿಸುವ ಅಥವಾ ತಿರಸ್ಕರಿಸುವ ಹಕ್ಕನ್ನ
ನೀಡುತ್ತದೆ. ನಿಮ್ಮ
ಮತವನ್ನ ಚಲಾಯಿಸಿ ಮತ್ತು ನಿಮ್ಮ ಉತ್ತಮ ಹಿತಾಸಕ್ತಿಯನ್ನು ಮನಸ್ಸಲ್ಲಿಟ್ಟುಕೊಂಡಿರುವ ಜನರನ್ನ ಆಯ್ಕೆ ಮಾಡಿ ನಿಮ್ಮ ಪ್ರೀತಿ
ಪಾತ್ರರಿಗಾಗಿ ಇದನ್ನು ಮಾಡಿ ಇದರಿಂದ ಅವರು
ನಿಮ್ಮ ದೃಷ್ಟಿಕೋನಗಳನ್ನ ಪ್ರಜಾಪ್ರಭುತ್ವದಲ್ಲಿ ಪ್ರತಿನಿಧಿಸುವ ವ್ಯಕ್ತಿಗಳಾಗುತ್ತಾರೆ.
ನೀವು
ಆಯ್ಕೆ ಮಾಡುವ ಶಾಸಕರು ಸಂಸದರು, ನಿಮ್ಮ ಪಿಂಚಣಿ ಯೋಜನೆ, ಆರೋಗ್ಯ ಸೇವೆಗಳ ಕುರಿತಾದ ಯೋಜನೆಗಳು, ಹಾಗೂ ಸಾಮಾಜಿಕ ಭದ್ರತೆಯನ್ನು
ಒದಗಿಸುವ ಸರ್ಕಾರದ ಯೋಜನೆಗಳ ಕುರಿತಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ನೀವು ಮತ ಚಲಾಯಿಸಿ
ನಿಮ್ಮ ಆಯ್ಕೆಯನ್ನ ಮಾಡಿದಾಗ ಮಾತ್ರ ನಿಮ್ಮ ಧ್ವನಿಗೂ ಒಂದು ನ್ಯಾಯ ಸಿಗುತ್ತದೆ.
ನಿಮ್ಮ
ಮತದಿಂದ ಚುನಾಯಿತರಾದ ಜಿಲ್ಲಾ ಪಂಚಾಯತಿ ಸದಸ್ಯರು ತಾಲೂಕು ಪಂಚಾಯಿತಿ ಸದಸ್ಯರು ಕಾರ್ಪೊರೇಟರ್ ಗಳು ಶಾಸಕರು ಸಂಸದರು,
ನಮ್ಮ ತೆರಿಗೆಗಳಿಂದ ಸಂಗ್ರಹಿಸಿದ ಹಣದಿಂದ ಸಾರ್ವಜನಿಕ ಸೇವೆಗಳಿಗೆ ಹೇಗೆ ಪಾವತಿಸಬೇಕು ಮತ್ತು
ತೆರಿಗೆ ಹೊರೆಯನ್ನ ಹೇಗೆ ಹಂಚಿಕೊಳ್ಳಬೇಕು ಎಂಬುದನ್ನು
ನಿರ್ಧರಿಸುತ್ತಾರೆ. ನಿಮ್ಮ
ಮತದ ಹಕ್ಕನ್ನ ನೀವು ಚಲಾಯಿಸದೇ ಇದ್ದಾಗ
ತಪ್ಪಾದ ವ್ಯಕ್ತಿ ಆಯ್ಕೆ ಆಗಿ ಬರುವ ಸಂಭವವಿರುತ್ತದೆ.
ಆಗ ಆ ವ್ಯಕ್ತಿ ತೆಗೆದುಕೊಳ್ಳುವ
ತಪ್ಪು ನಿರ್ಧಾರಗಳ ಪ್ರಭಾವವನ್ನು ನೀವು ಅನುಭವಿಸಬೇಕಾಗುತ್ತದೆ. ನಿಮ್ಮ
ಮತವನ್ನ ನೀವೇ ಚಲಾಯಿಸಿ ನಿಮ್ಮ
ಬದುಕನ್ನ ಪ್ರಜಾಪ್ರಭುತ್ವದಲ್ಲಿ ನೀವೇ ಕಟ್ಟಿಕೊಳ್ಳಿ.
ನಿಮ್ಮ ಪ್ರತಿನಿಧಿಗಳಿಗೆ ಮತವನ್ನ ಚಲಾಯಿಸಿದಾಗ ಅವರು ಕನಿಷ್ಠ ವೇತನ
ನೇಮಕಾತಿಯಲ್ಲಿ ನ್ಯಾಯ ಸಮ್ಮತತೆ ವೇತನ ಸಮಾನತೆ ಉದ್ಯೋಗ
ಭದ್ರತೆ ಕೆಲಸದ ಸುರಕ್ಷತೆ ಮತ್ತು ನಿಮ್ಮ ಉದ್ಯೋಗ ಧಾತರು ಒದಗಿಸುವ ಆರೋಗ್ಯ ವಿಮೆಗಳ ಬಗ್ಗೆ ಪರಿಣಾಮ ಬೀರುವ ಕಾನೂನುಗಳ ಬಗ್ಗೆ ನಿರ್ಧಾರಗಳನ್ನ ತೆಗೆದುಕೊಳ್ಳಲು ಅನೂಕುಲವಾಗುತ್ತದೆ.
ಒಂದಲ್ಲ ಇನ್ನೊಂದು
ರೀತಿಯಲ್ಲಿ, ಪ್ರತಿಯೊಬ್ಬ ವ್ಯಕ್ತಿಯು ತೆರಿಗೆಗಳನ್ನು ಪಾವತಿಸುತ್ತಾನೆ. ಈ ತೆರೆಗೆಯ ಹಣ ಆರೋಗ್ಯ,
ರಕ್ಷಣೆ, ಶಿಕ್ಷಣ ಮತ್ತು
ಸಾಮಾಜಿಕ ಸೇವೆಗಳಿಗೆ ಖರ್ಚು ಮಾಡಲಾಗುತ್ತದೆ. ಈ
ತೆರಿಗೆ ಹಣದ ಸದುಪಯೋಗ ಆಗುತ್ತಿದಿಯಾ?
ಅಥವಾ ಇದರ ನಿರ್ವಹಣೆಯಲ್ಲಿ ಭ್ರಷ್ಟಾಚಾರ
ನೇಡೆಯುತ್ತಿದೆಯಾ ಎನ್ನುವುದರ
ಬಗ್ಗೆ ನಮಗೆಲ್ಲ ಹಲವು ಪ್ರಶ್ನೇಗಳಿರುತ್ತವೆ. ಇದಕ್ಕೆ
ಉತ್ತರ ಒಂದೆ. ನಿಮ್ಮ ಮತದ ಮೂಲಕ ಸೂಕ್ತ
ವ್ಯಕ್ತಿಯನ್ನ ಆಯ್ಕೆಮಾಡಿ ಭವಿಷ್ಯವನ್ನ ಭದ್ರಗೋಳಿಸ ಬೇಕು.
ಪ್ರತಿ
ಮತವು ಮುಖ್ಯ. ನಿಮಗಾಗಿ ನಿಮ್ಮ ಕುಟುಂಬ ಮತ್ತು ನಿಮ್ಮ ಸಮುದಾಯಕ್ಕಾಗಿ, ನೀವು ಬಯಸುವ ಜೀವನದ
ಗುಣಮಟ್ಟದ ಮೇಲೆ, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ನೀವು ಹೊಂದಿದ್ದೀರಿ.
ಕೈಗೆಟುಕುವ ವಸತಿ, ಆರ್ಥಿಕ ನ್ಯಾಯ, ಉದ್ಯೋಗ, ಉತ್ತಮ ಆರೋಗ್ಯ ಸೇವೆಗಳು, ಪರಿಸರ ಸಂರಕ್ಷಣೆ ಮತ್ತು ಗುಣಮಟ್ಟದ ಶಿಕ್ಷಣ ದಂತಹ ನೀವು ಕಾಳಜಿ
ವಹಿಸುವ ಸಮಸ್ಯೆಗಳ ಪರವಾಗಿ ನಿಲ್ಲಲು ಮತದಾನವು ನಿಮ್ಮ ಒಂದು ಅವಕಾಶವಾಗಿದೆ. ಅದರಲ್ಲೂ
ಮೂದಲ ಬಾರಿ ಮತ ಚಲಾಯಿಸಲಿರುವ
ಯುವಕ ಈ ಎಲ್ಲ ವಿಷಯಗಳ
ಬಗ್ಗೆ ಜಾಗೃತನಾಗಿದ್ದರೆ ದೇಶದ ಭವಿಷ್ಯವು ಭದ್ರವಾಗಿರುತ್ತದೆ.
ನಿಮ್ಮ ಮತವನ್ನ ನೀವೆ ಚಲಾಯಿಸಿ ನಿಮ್ಮ
ಸ್ವಾತಂತ್ಯ್ರವನ್ನು ಸಂಭ್ರಮೀಸಿ.